Banner 160x300

ವಿಶ್ವಮಾನವ ದಿನಾಚರಣೆ ಏಕೆ ಆಚರಿಸುವರು? Why Karnataka People Celebrate Viswamanava Day in December 29

ಇದನ್ನು PDF Format ನಲ್ಲಿ Download ಮಾಡಿಕೊಳ್ಳಲು ಇಲ್ಲಿ Click ಮಾಡಿ.


ವಿಶ್ವಮಾನವ ದಿನಾಚರಣೆ ಏಕೆ ಆಚರಿಸುವರು? Why Karnataka People Celebrate Viswamanava Day in December 29
ವಿಶ್ವಮಾನವ ದಿನಾಚರಣೆ
ವಿಶ್ವಮಾನವ ದಿನಾಚರಣೆ
ಡಿಸೆಂಬರ್ 29

ವಿಶ್ವ ಮಾನವ ಸಂದೇಶ:
  • ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು.
  • ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಗೌರವ ಸೂಚಕವಾಗಿ ವಿಶ್ವ ಮಾನವ ದಿನವನ್ನು ಆಚರಿಸಲಾಗುವುದು.

ಎಂದಿನಿಂದ ಆಚರಿಸಲಾಗುವುದು?
  • ಕರ್ನಾಟಕ ಸರ್ಕಾರ 2015 ರ ಡಿಸೆಂಬರ್‌ ನಲ್ಲಿ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರಿಗೆ ಗೌರವ ಸೂಚಿಸಲು ಪ್ರತಿವರ್ಷ ಡಿಸೆಂಬರ್ 29 ರಂದು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು.

ಡಿಸೆಂಬರ್ 29 ರಂದೇ ಏಕೆ?
  • ಕುವೆಂಪು ಅವರು 1904 ಡಿಸೆಂಬರ್ 29 ರಂದು ಜನಿಸಿದರು. 
  • ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವಮಾನವ ಗೀತೆ:
ಓ ನನ್ನ ಚೇತನ
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
- ಕುವೆಂಪು

ಈ ದಿನದ ಕಾರ್ಯಕ್ರಮಗಳು:
  • ಕಡ್ಡಾಯವಾಗಿ ಕರ್ನಾಟಕದ ಎಲ್ಲಾ ಪಾಠಶಾಲೆಗಳಲ್ಲಿ ಈ ದಿನವನ್ನು ಆಚರಿಸುವರು.
  • ಕುವೆಂಪು ಅವರ ಭಾವಗೀತೆ, ಕವನ, ಹಾಡುಗಳನ್ನು ಹಾಡುವುದರ ಮೂಲಕ ಇಂದಿನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಕುವೆಂಪು ಅವರ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುವುದು
  • ರಾಜ್ಯ ಸರಕಾರದ ವತಿಯಿಂದಲೇ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕುವೆಂಪು ಅವರ ವಿಶೇಷ ಗೀತಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಕುವೆಂಪು ಅವರ ಬಗ್ಗೆ:
  • ಜನನ: 1904 ಡಿಸೆಂಬರ್ 29
  • ಜನ್ಮಸ್ಥಳ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗಿ
  • ಮರಣ: 1994 ನವೆಂಬರ್ 11
  • ಅಂತ್ಯ ಸಂಸ್ಕಾರ ಸ್ಥಳ: ಕುಪ್ಪಳಿ, ಶಿವಮೊಗ್ಗ ಜಿಲ್ಲೆ
  • ಹೆಂಡತಿ: ಹೇಮಾವತಿ
  • ಮಕ್ಕಳು: ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ 
  • ಪೂರ್ಣ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
  • ಕಾವ್ಯನಾಮ: ಕುವೆಂಪು
  • ಆತ್ಮಚರಿತ್ರೆ: ನೆನಪಿನ ದೋಣಿಯಲ್ಲಿ
  • ಮಹಾಕಾವ್ಯ: ಶ್ರೀರಾಮಾಯಣ ದರ್ಶನಂ (1949)
  • ಸ್ಮಾರಕಗಳು: ಕುಪ್ಪಳ್ಳಿಯಲ್ಲಿ ಕವಿಮನೆ ಎಂಬ ವಸ್ತು ಸಂಗ್ರಹಾಲಯ. ಶಿವಮೊಗ್ಗದ ಸಹ್ಯಾದ್ರಿಯಲ್ಲಿರುವ ವಿವಿಗೆ ಕುವೆಂಪು ವಿವಿ ಎಂಬ ಹೆಸರು. ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಗೆ ಕುವೆಂಪು ಹೆಸರು.
  • ಕನ್ನಡದ ಮೊದಲನೆಯ ರಾಷ್ಟ್ರಕವಿ - ಎಂ.ಗೋವಿಂದ ಪೈ.
  • ಕನ್ನಡದ ಎರಡನೆಯ ರಾಷ್ಟ್ರಕವಿ - ಕುವೆಂಪು.
  • ಕನ್ನಡದ ಮೂರನೆಯ ರಾಷ್ಟ್ರಕವಿ - ಜಿ.ಎಸ್.ಶಿವರುದ್ರಪ್ಪ.

ಮುಖ್ಯ ಪ್ರಶಸ್ತಿಗಳು:
  • 1967 ರಲ್ಲಿ ಜ್ಞಾನಪೀಠ ಪ್ರಶಸ್ತಿ (ಶ್ರೀರಾಮಾಯಣ ದರ್ಶನಂ) (ಮೊದಲ ಬಾರಿಗೆ ಕನ್ನಡಕ್ಕೆ)
  • 1955 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀರಾಮಾಯಣ ದರ್ಶನಂ) (ಮೊದಲ ಬಾರಿಗೆ ಕನ್ನಡಕ್ಕೆ)
  • ಕರ್ನಾಟಕ ಸರ್ಕಾರ ಕೊಡುವ ಕರ್ನಾಟಕ ರತ್ನ ಪ್ರಶಸ್ತಿ (1992 ರಲ್ಲಿ)  (ಮೊದಲ ವ್ಯಕ್ತಿ)
  • 1987 ರಲ್ಲಿ ಪಂಪ ಪ್ರಶಸ್ತಿ (ಮೊದಲ ವ್ಯಕ್ತಿ)
  • 1988 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ